ಅತಿಯಾಗಿ ಸಂಕೋಚಪಡುವುದನ್ನು ಬಿಟ್ಟುಬಿಡಬೇಕೆಂದು ಒಬ್ಬ ವ್ಯಕ್ತಿ ತನ್ನ ಸಹೋದರನಿಗೆ ಬುದ್ಧಿ ಹೇಳುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು. ಆಗ ಅವರು, ಸಂಕೋಚ ಪಡುವುದು ಸತ್ಯವಿಶ್ವಾಸದ ಭಾಗವಾಗಿದೆ ಮತ್ತು ಅದು ಒಳಿತಲ್ಲದೆ ಬೇರೇನನ್ನು ತರುವುದಿಲ್ಲ ಎಂದರು. ಸಂಕೋಚ ಸ್ವಭಾವವು ಸುಂದರವಾದುದನ್ನು ಮಾಡಲು ಮತ್ತು ಹೊಲಸನ್ನು ಬಿಟ್ಟುಬಿಡಲು ಪ್ರೇರೇಪಿಸುತ್ತದೆ.