ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಫಜ್ರ್ ನಮಾಝ್ ಮಾಡಿದವನು ಅಲ್ಲಾಹನ ರಕ್ಷಣೆ ಮತ್ತು ಭದ್ರತೆಯಲ್ಲಿರುತ್ತಾನೆ; ಅಲ್ಲಾಹು ಅವನನ್ನು ರಕ್ಷಿಸುತ್ತಾನೆ ಮತ್ತು ಬೆಂಬಲಿಸುತ್ತಾನೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ), ಫಜ್ರ್ ನಮಾಝನ್ನು ತೊರೆಯುವ ಮೂಲಕ ಅಥವಾ ಅದನ್ನು ನಿರ್ವಹಿಸಲು ಹೋಗುವವರಿಗೆ ಅಡ್ಡಿಪಡಿಸುವುದು ಅಥವಾ ಅವರ ಮೇಲೆ ಆಕ್ರಮಣ ಮಾಡುವುದು ಮುಂತಾದವುಗಳ ಮೂಲಕ ಈ ಕರಾರಿನಲ್ಲಿ ಕೊರತೆ ಮಾಡುವವರ ಮತ್ತು ಅದನ್ನು ಮುರಿಯುವವರ ಬಗ್ಗೆ ಎಚ್ಚರಿಕೆ ನೀಡುತ್ತಾರೆ. ಹೀಗೆ ಮಾಡುವವರು ಈ ರಕ್ಷಣೆಯನ್ನು ಮುರಿದಿದ್ದಾರೆ ಮತ್ತು ಅಲ್ಲಾಹನ ವಿಷಯದಲ್ಲಿ ಕೊರತೆ ಮಾಡಿದವರನ್ನು ಅವನು ಪ್ರಶ್ನಿಸುತ್ತಾನೆ ಎಂಬ ಎಚ್ಚರಿಕೆಗೆ ಅರ್ಹರಾಗುತ್ತಾರೆ. ಅಲ್ಲಾಹು ಯಾರನ್ನಾದರೂ ಪ್ರಶ್ನಿಸಿದರೆ ಅವನು ಅವನನ್ನು ಹಿಡಿದು ತಲೆಕೆಳಗಾಗಿ ನರಕಕ್ಕೆ ಎಸೆಯುತ್ತಾನೆ.