ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಪ್ರಯಾಣದಲ್ಲಿದ್ದರು. ಆಗ ರಾತ್ರಿಯಲ್ಲಿ ಜನರು ಮಲಗಲು ತಮ್ಮ ಒಂಟೆಗಳಲ್ಲಿ ಮತ್ತು ಡೇರೆಗಳಲ್ಲಿದ್ದಾಗ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಬ್ಬ ದೂತನನ್ನು ಕಳುಹಿಸಿ, ಒಂಟೆಯ ಕೊರಳುಗಳಲ್ಲಿ ಕಟ್ಟಿರುವ ಹಾರಗಳನ್ನು, ಅವು ಬಿಲ್ಲಿನ ತಂತಿಯಿಂದ ಮಾಡಿದ ಹಾರವಾದರೂ ಅಥವಾ ಗಂಟೆ, ಚಪ್ಪಲಿಗಳ ಹಾರವಾದರೂ ಅವುಗಳನ್ನು ಕತ್ತರಿಸಬೇಕೆಂದು ಆದೇಶಿಸಿದರು. ಏಕೆಂದರೆ ಒಂಟೆಯನ್ನು ವಕ್ರ ದೃಷ್ಟಿಯಿಂದ ರಕ್ಷಿಸಿಕೊಳ್ಳಲು ಅವರು ಅವುಗಳನ್ನು ಕಟ್ಟುತ್ತಿದ್ದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವುಗಳನ್ನು ಕತ್ತರಿಸಲು ಆದೇಶಿಸಿದರು. ಏಕೆಂದರೆ, ಅವು ಯಾವುದೇ ರಕ್ಷಣೆ ನೀಡುವುದಿಲ್ಲ. ಉಪಕಾರ ಮತ್ತು ತೊಂದರೆ ಮಾಡುವುದು ಅಲ್ಲಾಹು ಮಾತ್ರ. ಅವನಿಗೆ ಯಾವುದೇ ಸಹಭಾಗಿಗಳಿಲ್ಲ.