ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹು ಯಾರಿಗಾದರೂ ಒಳಿತು ಮಾಡಲು ಬಯಸಿದರೆ, ಅವನು ತನ್ನ ಧರ್ಮದ ತಿಳುವಳಿಕೆಯನ್ನು ಅವನಿಗೆ ನೀಡುತ್ತಾನೆ. ಸರ್ವಶಕ್ತನಾದ ಅಲ್ಲಾಹನು ನನಗೆ ನೀಡಿದ ಜೀವನೋಪಾಯ, ಜ್ಞಾನ ಮತ್ತು ಇತರ ವಸ್ತುಗಳನ್ನು ವಿತರಿಸುವುದನ್ನು ಮಾತ್ರ ನಾನು ಮಾಡುತ್ತಿದ್ದೇನೆ. ವಾಸ್ತವವಾಗಿ ಇವೆಲ್ಲವೂ ಅಲ್ಲಾಹನ ಕೊಡುಗೆಗಳಾಗಿವೆ. ಅಲ್ಲಾಹನ ಹೊರತಾದವರೆಲ್ಲರೂ ಕೇವಲ ಕಾರಣಗಳಾಗಿದ್ದು ಅಲ್ಲಾಹನ ಅಪ್ಪಣೆಯಿಂದಲ್ಲದೆ ಯಾವುದೇ ಉಪಕಾರ ಮಾಡಲು ಅವರಿಗೆ ಸಾಧ್ಯವಿಲ್ಲ. ಈ ಸಮುದಾಯವು ಅಲ್ಲಾಹನ ಆಜ್ಞೆಗಳಲ್ಲಿ ಸದಾ ಅಚಲವಾಗಿ ನಿಲ್ಲುತ್ತದೆ. ಅವರನ್ನು ವಿರೋಧಿಸುವವರು ಅವರಿಗೆ ಯಾವುದೇ ತೊಂದರೆ ಮಾಡಲಾರರು, ಪ್ರಳಯವು ಸಂಭವಿಸುವ ತನಕ."