ಮನಸ್ಸು ಮೋಹಿಸುವ ಕಾರ್ಯಗಳಿಂದ, ಅಂದರೆ ನಿಷೇಧಿಸಲಾದ ಕೃತ್ಯಗಳನ್ನು ಮಾಡುವುದು, ಕಡ್ಡಾಯ ಕರ್ಮಗಳನ್ನು ಸರಿಯಾಗಿ ನಿರ್ವಹಿಸುತ್ತಿರುವುದು ಮುಂತಾದವುಗಳಿಂದ ಸ್ವರ್ಗವನ್ನು ಮುಚ್ಚಲಾಗಿದೆ ಮತ್ತು ಸುತ್ತುವರಿಯಲಾಗಿದೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ವಿವರಿಸುತ್ತಾರೆ. ಯಾರ ಮನಸ್ಸು ಈ ವಿಷಯಗಳಲ್ಲಿ ಅವನ ಮೋಹಗಳನ್ನು ಹಿಂಬಾಲಿಸುತ್ತದೋ ಅವನು ನರಕಕ್ಕೆ ಅರ್ಹನಾಗಿದ್ದಾನೆ. ಕಡ್ಡಾಯ ಕರ್ಮಗಳನ್ನು ಸರಿಯಾಗಿ ನಿರ್ವಹಿಸುವುದು, ನಿಷೇಧಿಸಲಾದ ಕೃತ್ಯಗಳನ್ನು ತೊರೆಯುವುದು ಮತ್ತು ಅದಕ್ಕಾಗಿ ಸಹನೆಯಿಂದ ಇರುವುದು ಮುಂತಾದ ಮನಸ್ಸು ಇಷ್ಟಪಡದ ಕಾರ್ಯಗಳಿಂದ ಸ್ವರ್ಗವನ್ನು ಮುಚ್ಚಲಾಗಿದೆ ಮತ್ತು ಸುತ್ತುವರಿಯಲಾಗಿದೆ. ಯಾರು ಈ ವಿಷಯದಲ್ಲಿ ಮನಸ್ಸಿನ ಆಸೆಗಳಿಗೆ ವಿರುದ್ಧವಾಗಿ ನಿಂತು ಪರಿಶ್ರಮ ಪಡುತ್ತಾನೋ ಅವನು ಸ್ವರ್ಗಕ್ಕೆ ಅರ್ಹನಾಗಿದ್ದಾನೆ.