ಮನುಷ್ಯನ ಚಪ್ಪಲಿಯ ಮೇಲಿರುವ ತೊಗಲಪಟ್ಟಿಗಿಂತಲೂ ಸ್ವರ್ಗ ಮತ್ತು ನರಕ ಅವನಿಗೆ ಹತ್ತಿರದಲ್ಲಿದೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸಿದ್ದಾರೆ. ಏಕೆಂದರೆ, ಅವನು ಅಲ್ಲಾಹನನ್ನು ಸಂಪ್ರೀತಗೊಳಿಸುವ ಒಂದು ಸತ್ಕರ್ಮವನ್ನು ಮಾಡಿ ಸ್ವರ್ಗವನ್ನು ಪ್ರವೇಶಿಸಬಹುದು, ಅಥವಾ ಒಂದು ಪಾಪವನ್ನು ಮಾಡಿ ಅದು ಅವನ ನರಕ ಪ್ರವೇಶಕ್ಕೆ ಕಾರಣವಾಗಬಹುದು.