ಸಹ್ಲ್ ಬಿನ್ ಸಅದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ತನ್ನ ಎರಡು ದವಡೆಗಳ ನಡುವೆ ಮತ್ತು ತನ್ನ ಎರಡು ಕಾಲುಗಳ ನಡುವೆ ಇರುವುದನ್ನು ನಿಯಂತ್ರಿಸುತ್ತೇನೆಂದು ಯಾರು ನನಗೆ ಖಾತ್ರಿ ನೀಡುತ್ತಾನೋ, ಅವನಿಗೆ ನಾನು ಸ್ವರ್ಗದ ಖಾತ್ರಿ ನೀಡುತ್ತೇನೆ." Sahih/Authentic. - Al-Bukhari
explain-icon

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ಎರಡು ವಿಷಯಗಳನ್ನು ತಿಳಿಸುತ್ತಿದ್ದಾರೆ. ಮುಸಲ್ಮಾನನು ಅವೆರಡನ್ನು ಸರಿಯಾಗಿ ಉಪಯೋಗಿಸಿದರೆ ಅವನು ಸ್ವರ್ಗವನ್ನು ಪ್ರವೇಶಿಸುತ್ತಾನೆ. ಮೊದಲನೆಯದು: ಸರ್ವಶಕ್ತನಾದ ಅಲ್ಲಾಹು ಕೋಪಗೊಳ್ಳುವಂತಹ ಮಾತುಗಳನ್ನು ಆಡದಂತೆ ನಾಲಿಗೆಯನ್ನು ಹದ್ದುಬಸ್ತಿನಲ್ಲಿಡುವುದು. ಎರಡನೆಯದು: ಅಶ್ಲೀಲ ಕೃತ್ಯಗಳಲ್ಲಿ ತೊಡಗದಂತೆ ಗುಪ್ತಾಂಗವನ್ನು ಹದ್ದುಬಸ್ತಿನಲ್ಲಿಡುವುದು. ಏಕೆಂದರೆ, ಪಾಪಗಳು ಹೆಚ್ಚಾಗಿ ಈ ಎರಡು ಅಂಗಗಳಿಂದಲೇ ಸಂಭವಿಸುತ್ತವೆ.

explain-icon

ಹದೀಸಿನ ಪ್ರಯೋಜನಗಳು

  • ನಾಲಿಗೆ ಮತ್ತು ಗುಪ್ತಾಂಗವನ್ನು ಹದ್ದುಬಸ್ತಿನಲ್ಲಿಡುವುದು ಸ್ವರ್ಗ ಪ್ರವೇಶಕ್ಕೆ ದಾರಿಯಾಗಿದೆ.
  • ಇಲ್ಲಿ ನಿರ್ದಿಷ್ಟವಾಗಿ ನಾಲಿಗೆ ಮತ್ತು ಗುಪ್ತಾಂಗದ ಬಗ್ಗೆ ಹೇಳಲಾಗಿದೆ. ಏಕೆಂದರೆ ಇಹಲೋಕ ಮತ್ತು ಪರಲೋಕದಲ್ಲಿ ಜನರು ಅತಿಹೆಚ್ಚು ಪರೀಕ್ಷೆಗಳನ್ನು ಎದುರಿಸಬೇಕಾಗಿ ಬರುವುದು ಇವೆರಡರಿಂದಲೇ ಆಗಿದೆ.
explain-icon

ವರ್ಗಗಳು

explain-icon

ಇನ್ನಷ್ಟು