ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಅಲ್ಲಾಹನಲ್ಲಿ ಮತ್ತು ತಾನು ಅಲ್ಲಾಹನ ಬಳಿಗೆ ಹಿಂದಿರುಗುವ ಮತ್ತು ತನ್ನ ಕರ್ಮಗಳಿಗೆ ಪ್ರತಿಫಲವನ್ನು ಪಡೆಯುವ ಅಂತ್ಯದಿನದಲ್ಲಿ ವಿಶ್ವಾಸವಿಡುವವನಿಗೆ ಅವನ ವಿಶ್ವಾಸವು ಈ ಕೆಳಗಿನ ಕರ್ಮಗಳನ್ನು ಮಾಡುವಂತೆ ಒತ್ತಾಯಿಸುತ್ತದೆ: ಮೊದಲನೆಯದು: ಒಳ್ಳೆಯ ಮಾತುಗಳನ್ನು ಆಡುವುದು. ಉದಾ: ಸುಬ್ಹಾನಲ್ಲಾಹ್, ಲಾಇಲಾಹ ಇಲ್ಲಲ್ಲಾಹ್ ಮುಂತಾದ ದಿಕ್ರ್ಗಳನ್ನು ಹೇಳುವುದು, ಒಳಿತನ್ನು ಆದೇಶಿಸುವುದು, ಕೆಡುಕನ್ನು ವಿರೋಧಿಸುವುದು, ಜನರಲ್ಲಿ ಸುಧಾರಣೆ ಮಾಡುವುದು ಇತ್ಯಾದಿ. ಯಾರಿಗೆ ಇವುಗಳನ್ನು ಮಾಡಲು ಸಾಧ್ಯವಾಗುವುದಿಲ್ಲವೋ ಅವರು ಮೌನವಾಗಿದ್ದು ಇತರರಿಗೆ ತೊಂದರೆ ಕೊಡದೆ ತಮ್ಮ ನಾಲಿಗೆಯನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಎರಡನೆಯದು: ನೆರೆಹೊರೆಯವರನ್ನು ಗೌರವಿಸುವುದು. ಅಂದರೆ ಅವರಿಗೆ ಸಹಾಯ ಮಾಡುವುದು ಮತ್ತು ತೊಂದರೆ ಕೊಡದಿರುವುದು. ಮೂರನೆಯದು: ತಮ್ಮನ್ನು ಭೇಟಿ ಮಾಡಲು ಆಗಮಿಸುವ ಅತಿಥಿಗಳನ್ನು ಗೌರವಿಸುವುದು. ಅಂದರೆ ಅವರೊಡನೆ ಉತ್ತಮ ಮಾತುಗಳನ್ನಾಡುವುದು, ಆಹಾರ ನೀಡುವುದು ಇತ್ಯಾದಿ.