ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ದಾನಧರ್ಮವು ಆಸ್ತಿಯನ್ನು ಕಡಿಮೆ ಮಾಡುವುದಿಲ್ಲ. ಬದಲಿಗೆ, ಮನುಷ್ಯನಿಗೆ ಬರುವ ವಿಪತ್ತುಗಳನ್ನು ಅದು ತಡೆಯುತ್ತದೆ. ದಾನ ಮಾಡುವ ವ್ಯಕ್ತಿಗೆ ಅಲ್ಲಾಹು ಮಹಾ ಪ್ರತಿಫಲವನ್ನು ನೀಡುತ್ತಾನೆ. ದಾನ ಮಾಡುವುದರಿಂದ ಲಾಭವಾಗುತ್ತದೆಯೇ ವಿನಾ ನಷ್ಟವಾಗುವುದಿಲ್ಲ. ಪ್ರತೀಕಾರ ಪಡೆಯುವ ಅಥವಾ ಶಿಕ್ಷಿಸುವ ಸಾಮರ್ಥ್ಯವಿದ್ದೂ ಸಹ ಕ್ಷಮಾಗುಣವನ್ನು ಪ್ರದರ್ಶಿಸುವ ವ್ಯಕ್ತಿಗೆ ಅದು ಶಕ್ತಿ ಮತ್ತು ಪ್ರತಿಷ್ಟೆಯನ್ನು ಹೆಚ್ಚಿಸಿಕೊಡುತ್ತದೆ. ಇತರರ ಭಯದಿಂದ, ಅವರನ್ನು ಸಂತೋಷಪಡಿಸುವ ಉದ್ದೇಶದಿಂದ, ಅಥವಾ ಅವರಿಂದ ಏನಾದರೂ ಲಾಭ ಪಡೆಯುವುದಕ್ಕಾಗಿಯಲ್ಲದೆ ಕೇವಲ ಅಲ್ಲಾಹನ ಸಂಪ್ರೀತಿ ಮಾತ್ರ ಬಯಸಿ ಯಾರು ವಿನಯ ತೋರುತ್ತಾರೋ ಅದರ ಪ್ರತಿಫಲವಾಗಿ ಅವರಿಗೆ ಉನ್ನತ ಸ್ಥಾನಮಾನ ಮತ್ತು ಶ್ರೇಷ್ಠತೆ ದೊರಕದೆ ಇರಲಾರದು.