ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ತನ್ನ ದಾಸರ ರೂಪವನ್ನು ಅಥವಾ ದೇಹವನ್ನು, ಅದು ಸುಂದರವಾಗಿದೆಯೇ? ಅಸಹ್ಯವಾಗಿದೆಯೇ? ದೊಡ್ಡದೇ? ಸಣ್ಣದೇ? ಆರೋಗ್ಯದಲ್ಲಿದೆಯೇ? ಅನಾರೋಗ್ಯದಲ್ಲಿದೆಯೇ? ಎಂದು ನೋಡುವುದಿಲ್ಲ. ಅವರ ಆಸ್ತಿಯನ್ನು, ಅದು ಹೆಚ್ಚಿದೆಯೇ? ಅಥವಾ ಕಡಿಮೆಯಿದೆಯೇ? ಎಂದು ನೋಡುವುದಿಲ್ಲ. ಸರ್ವಶಕ್ತನಾದ ಅಲ್ಲಾಹು ಅವನ ದಾಸರನ್ನು ಇವುಗಳ ಆಧಾರದಲ್ಲಿ, ಅಂದರೆ ಅವು ಹೆಚ್ಚು ಇದೆಯೋ ಅಥವಾ ಕಡಿಮೆ ಇದೆಯೋ ಎಂಬ ಆಧಾರದಲ್ಲಿ ಶಿಕ್ಷಿಸುವುದಿಲ್ಲ ಮತ್ತು ವಿಚಾರಣೆ ಮಾಡುವುದಿಲ್ಲ. ಬದಲಿಗೆ ಅವನು ಅವರ ಹೃದಯಗಳನ್ನು, ಅದರಲ್ಲಿ ದೇವಭಯ, ದೃಢವಿಶ್ವಾಸ, ಪ್ರಾಮಾಣಿಕತೆ ಮತ್ತು ನಿಷ್ಕಳಂಕತೆಗಳಿವೆಯೋ, ಅಥವಾ ಅವುಗಳಲ್ಲಿರುವುದು ತೋರಿಕೆ ಮತ್ತು ಕೀರ್ತಿಯ ಆಸೆಯೋ ಎಂದು ನೋಡುತ್ತಾನೆ. ಅದೇ ರೀತಿ, ಅವರ ಕರ್ಮಗಳನ್ನು, ಅದು ಒಳ್ಳೆಯ ಕರ್ಮಗಳೋ ಅಥವಾ ಕೆಟ್ಟ ಕರ್ಮಗಳೋ ಎಂದು ನೋಡಿ ಅವುಗಳ ಆಧಾರದಲ್ಲೇ ಅವರಿಗೆ ಪ್ರತಿಫಲ ಮತ್ತು ಶಿಕ್ಷೆಯನ್ನು ನೀಡುತ್ತಾನೆ.