ಈ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಸಹಭಾಗಿಗಳ ಅಗತ್ಯದಿಂದ ಸಂಪೂರ್ಣ ಮುಕ್ತನಾಗಿದ್ದಾನೆ. ಅಂದರೆ, ಅವನಿಗೆ ಯಾವುದೇ ವ್ಯಕ್ತಿಯ ಅಥವಾ ವಸ್ತುವಿನ ಅಗತ್ಯವಿಲ್ಲ. (ಅವನು ಸಂಪೂರ್ಣ ನಿರಪೇಕ್ಷ). ಮನುಷ್ಯನು ಒಂದು ಒಳ್ಳೆಯ ಕಾರ್ಯವನ್ನು ಮಾಡಿ, ಅದನ್ನು ಅಲ್ಲಾಹನಿಗೂ ಇತರರಿಗೂ ಅರ್ಪಿಸಿದರೆ, ಅಲ್ಲಾಹು ಆ ಕಾರ್ಯವನ್ನು ಸ್ವೀಕರಿಸುವುದಿಲ್ಲ. ಅವನು ಅದನ್ನು ಆ ವ್ಯಕ್ತಿಗೇ ಮರಳಿಸಿಬಿಡುತ್ತಾನೆ. ಆದ್ದರಿಂದ, ನಾವು ಯಾವುದೇ ಕಾರ್ಯವನ್ನು ಮಾಡುವಾಗ ಅದನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಬೇಕು. (ಅದರಿಂದ ಇತರ ಯಾರ ಸಂಪ್ರೀತಿಯನ್ನೂ ಬಯಸಬಾರದು). ಏಕೆಂದರೆ, ಅಲ್ಲಾಹನ ಸಂಪ್ರೀತಿಗಾಗಿ ಮಾತ್ರ ಮಾಡಿದ ಕಾರ್ಯವನ್ನಲ್ಲದೆ ಬೇರೆ ಯಾವ ಕಾರ್ಯವನ್ನೂ ಅವನು ಸ್ವೀಕರಿಸುವುದಿಲ್ಲ.